"ಸ್ವಾಮಿ", ’ಬುದ್ಧಿಯವರು ಇದ್ದಾರ...?’
ಈ ಮೆಲುದನಿ ತಟ್ಟಿತ್ತು - ನನ್ನ ಮನವ;
ತಲೆಯೆತ್ತಿ ನೋಡಿದೆ -
ಮಿಡಿಯಿತು ನನ್ನಂತರಂಗ...ಆ ಬಡತನದ ಮುಖ ಕಂಡು!
"ಹೊಡೆದಂತಾಯಿತು" ನನ್ನ ಹೃದಯಕೆ - ಆ ಕಂಗಳಿಂದ (ಕುಳಿಬಿದ್ದ ಕಂಗಳಿಂದ)
ಹುರುಪಿಲ್ಲದ...ಶವಕಳೆ ಕವಿದ - ಆ ಮೋರೆಯಿಂದ...?
ಬಡತನದ ಬೇಗೆಯ - ಬೇಗೆಯಿಂದ ಮರುಗಿದ,
ಮರುಗಿ, ಮರುಗಿ - ಕೊರಗಿ, ಸೊರಗಿದ "ಭಾರಿ ಗುಂಡು...!!!"
ಒಂದು ಕ್ಷಣ - ನಾನಲ್ಲದವ ನಾನಾದೆ,
ಮನ ಜುಮ್ಮೆಂದಿತು...ಮೈ ನಡುಗಿತು;
ದೇವರೇ "ಯಾಕೀ ಜೀವನ?
ಈ ಸ್ಥಿತಿಯ ತರದಿರು ಯಾರಿಗೂ..." ಎಂದು ಬೇಡಿಕೊಂಡೆ
ಆ ಭಗವಂತನ.
ಕಣ್ಣೀರು ಮನೆ ಮಾಡಿದವು -
ಗೂಡಿಟ್ಟವು ಈ ನನ್ನ ಕಂಗಳಲಿ...
ಕ್ಷಣ ಕಾಲದ ನಂತರ ಅರಿವಾಯಿತು???
ನನ್ನ ವಾಸ್ತವ...
ನಾ ಯಾರೆಂದು; ಮುಖದಲಿ ಮೂಡಿತು - ಕಿರುನಗೆ...!
ಕಣ್ತೆರೆದೆ...ಕಾಣದಾದೆ...ಆ ಬಡತನದ ಮೋರೆಯ?
ಆ ಕಿರುನಗೆ ನನ್ನ ಅಣಕಿಸಿದಂತೆ -
ಏನೋ ಆತಂಕ - ದುಗುಡ
ಅಂಜಿಕೆ - ಆ ಮುಖವ ನೋಡಿದಾಗಿನಿಂದ...???
ಹಪಮ
No comments:
Post a Comment